ಎಲ್ಲಿ ಶ್ರೀ ತುಳಸಿಯ ವನವುll ಅಲ್ಲೋಪ್ಪುವರು ಸಿರಿ ನಾರಾಯಣರು llಪ ll
ಗಂಗೆ ಯಮುನೆ ಗೋದಾವರಿ ಕಾವೇರಿ ll ಕಂಗೊ ಳಿಸುವ ಮಣಿಕರ್ಣಿಕೆಯು ll ತುಂಗಭದ್ರೆ ಕೃಷ್ಣ ವೇಣಿ ತೀರ್ಥಗಳೆಲ್ಲ ll ಸಂಗಡಿಸುತ ವೃಕ್ಷ ಮೂಲದಲ್ಲಿರುವುವು ll1ll
ಸರಸಿಜ ಭವ ಭವ ಸುರಪ ಪಾವಕ ll ಚಂದಿರ ಸೂರ್ಯ ಮೊದಲಾದವರು ll ಸಿರಿ ರಮಣ ನಾಜ್ಞೆಯಲಿ ಅಗಲದಂತೆ ll ತರು ಮಧ್ಯದಲಿ ನಿತ್ಯ ನೆಲೆಸಿಹರು ll2ll
ಋಗ್ವೇದ ಯಜುರ್ವೇದ ಸಾಮ ಅಥರ್ವಣ ll ಅಗ್ಗಳಿಸುವ ವೇದ ಘೋಷಗಳು ll ಅಗ್ರದಲ್ಲಿರುವುದು ಬೆಟ್ಟದೊಡೆಯನಲ್ಲಿ ll ಶೀಘ್ರದಿ ಒಲಿವ ಶ್ರೀ ಪುರಂದರ ವಿಠ್ಠಲ ll3ll